ಅಮ್ಮ ಎಷ್ಟೇ ಬಡತನವಿದ್ದರೂ ಇಂಥಹ ಹಲ್ಕಟ್ ಕೆಲಸ ನಮಗೆ ಬೇಡ ಇನ್ನು ಮುಂದೆ ನಮ್ಮ ಮನೆಗೆ ಯಾವ ಗಂಡಸೂ ಬರಬಾರದು. ನನಗೆ ಬೇಗ ಮದುವೆ ಮಾಡಿ ಎಂದು ತನ್ನ ತಾಯಿ ಪೂಜಾ ಗಾಂಧಿಗೆ ಮಗಳಾದ ನೇಹಾ ಪಾಟೀಲ್ ಬೇಸರದಿಂದ ಹೇಳುತ್ತಾಳೆ. ಮಗಳು ತನ್ನ ದಾರಿ ಹಿಡಿಯಬಾರದು ಗಂಡನ ಮನೆ ಸೇರಬೇಕು ಎಂಬ ಉದ್ದೇಶದಿಂದ ಬಡತನವಿದ್ದರೂ ತನ್ನ ಹಳೇ ವೃತ್ತಿಗೆ ತಾಯಿ ವಿದಾಯ ಹೇಳುತ್ತಾಳೆ. ಈ ಮೇಲ್ಕಂಡ ದೃಶ್ಯವನ್ನು ತಿಪ್ಪಜ್ಜಿ ಸರ್ಕಲ್ ಚಿತ್ರಕ್ಕಾಗಿ ಬಿ.ದುರ್ಗದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.
ರೂಬಿ ಸಿನಿ ಕ್ರಾಪ್ಟ್ ಸಂಸ್ಥೆಯಲ್ಲಿ ಆರ್.ಜಿ.ಸಿದ್ದರಾಮಯ್ಯ, ಎಸ್.ಕೆ.ವಿನೋದ್ ಕೃಷ್ಣ ನಿರ್ಮಿಸುತ್ತಿರುವ ಆದಿತ್ಯ ಚಿಕ್ಕಣ್ಣ ಚಿತ್ರ ಕಥೆ ರಚಿಸಿ ನಿರ್ದೇಶಿಸುತ್ತಿರುವ ತಿಪ್ಪಜ್ಜಿ ಸರ್ಕಲ್ ಚಿತ್ರಕ್ಕೆ ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ, ಡಾ|| ಬಿ.ಎಲ್.ವೇಣು, ಕಥೆ ಮತ್ತು ಸಂಭಾಷಣೆ, ಭರಣಿ ಶ್ರೀ. ಸಂಗೀತ, ದೀಪು ಎಸ್.ಕುಮಾರ್. ಸಂಕಲನ, ಡಾ|| ವಿ.ನಾಗೇಂದ್ರ ಪ್ರಸಾದ್, ಗೌಸ್ಫೀರ್ ಸಾಹಿತ್ಯವಿದೆ. ಪೂಜಾಗಾಂಧಿ, ಡಾ|| ಸುರೇಶ್ ಶರ್ಮ, ದ್ರುವಶರ್ಮ, ನೇಹಾ ಪಾಟೀಲ್ ಸತ್ಯಜಿತ್ ಶ್ರೀನಿವಾಸಮೂರ್ತಿ, ಮಾನಸಿ, ಸುರೇಶ್ ರೈ, ಜಯರಾಮ್, ಬೇಬಿ ಅನುಷಾ, ಜ್ಯೋತಿ ಗುರುಪ್ರಸಾಧ್ ತಾರಾಬಳಗದಲ್ಲಿದ್ದಾರೆ.